ರಂಗಜ್ಜನ ಬಾಳ ಪುರಾಣ
-----------------------
ಬರಗಾಲದ ನೆಲವನ್ನೇ ನೆಪವಾಗಿಸಿ
ಸುಣ್ಣ-ಬಣ್ಣ ಕಾಣದ ಶಿಥಿಲ ಗೋಡೆಗಳ ಮನೆ
ಅದರೊಳಗೆ ಕಷ್ಟಗಳ ಕಡಲ ಹೊಡೆತಕ್ಕೆ ಮುರಿದು ಮೂಲೆಸೇರಿದ ಎರಡು ಮನ
ಬರುವ ಭರಣಿ ಮಳೆಗೋ , ಬೀಸುವ ಬಿರುಗಾಳಿಗೋ
ಕಿತ್ತು ಹೋಗುವ ಸೂರು
ಜೊತೆಗೆ ನಿಲ್ಲದ ಕೃತಘ್ನ ಊರು
ಮುಂಜಾನೆಯಿಂದಲೇ ಮುಗಿಬೀಳುವ ಸಾಲವಸೂಲಿಗಾರರ ಸಾಲು
ಸುಕ್ಕುಗಟ್ಟಿದ ಹಣೆಯ ಮೇಲೆ ಇರುವ ದುರಾದೃಷ್ಟ ಗೆರೆಗಳು ಎರಡು-ಮೂರು
ತಂದೋರಗಿದೆ ಮನಗಳ ಮಧ್ಯೆ ಗಡಿರೇಖೆಗಳ ಸಹಸ್ರಾರು
ದೀಪದ ಎಣ್ಣೆಗೋ , ಹೆಂಡತಿಯ ದವಾಯಿಗೋ
ಕಿಸೆಯಲ್ಲಾ ಹುಡುಕಾಡಿದರು ಹುಟ್ಟದ ಎರಡು ರೂಪಾಯಿ
ಸಂಜೆ ನೋವುಗಳ ಒಡನೆ ನುಂಗುವ ಅವರಿವರ ಕೃಪೆಯ ಸಾರಾಯಿ
ಅವಮಾನಗಳೇ ಆಭರಣಗಳಾಗಿರುವ ಅನರ್ಥ ಜೀವನ
ಆಹ್ವಾನ್ವಿತ್ತರು ಬಂದಪ್ಪದ ಅರೆಕಾಲಿಕ ಮರಣ
ಇದೇ ಆರ್ಥಿಕತೆ ಅನಾವಸ್ಥೆಯಲಿ ಅರ್ಥ ಕಳೆದು ಕೊಂಡ ರಂಗಜ್ಜನ ಬಾಳ ಪುರಾಣ
-- ಪ್ರಭಾತ್
