Sunday 14 September 2008

ಒಳಿತು
ತುಂಬು ಕೊಳದಿ ಬಿರಿದ
ತಾವರೆಯು ,ಇಬ್ಬನಿಯ ಒಂದು ಹನಿಗೆ
ನಗೆ ಬೀರಿ ಅಭಿನಂದಿಸುವುದಿಲ್ಲವೇ ?
ಹುಟ್ಟಿ, ಬೆಳೆದ ಕೊಳದ, ಆ ಸಹಸ್ರ ಕೋಟಿಹನಿಗಳಿಗೆ
ಇಲ್ಲದ ಆ ಸನ್ಮಾನ ಕರಗಿ ಹೋಗುವ ಈ ಇಬ್ಬನಿಯ ಹನಿಗೆ ಏಕೆ ?
ಸೂಕ್ಷ್ಮವೋ, ಕ್ಷಣಿಕವೊ
ದೊರೆತ ಅಮೂಲ್ಯ ವಸ್ತುಗಳಿಗೆ ಅಭಿನಂದಿಸುವುದು ಒಳಿತು ..


ಬೆಳೆಗುವ ರವಿಯನೇ ಸರಿಸಿ,
ಅಗಸವ ಅಪ್ಪಿ;
ಧರೆಯ ವಿರಹವ ಕಂಡು ಕುಣಿಯುವ
ಕಾರ್ಮೋಡಕೆ;
ಎಂದೋ, ಎಲ್ಲೋ ಸುರುಸಿದ ನಾಲ್ಕುಹನಿಗಾಗಿ
ಹದವಾದ ಅವನಿ ಕ್ಷಮಿಸುವಿದು ಏಕೆ ?
ಕಷ್ಟವೋ, ನಷ್ಟವೋ
ಉಪಕಾರವ ನೆನೆದು ಕೃತಜ್ಞಿಸುವುದು ಅತಿ ಒಳಿತು...

ಪಕ್ಷ ಬದಲಿಸುವ , ಆಕಾರ ಅಸ್ಥಿರ,
ಚಂಚಲ ಚಂದಿರನ ಕಂಡು ಚಕೋರಿ
ಎಂದಾದರು ಮುನಿಸೀತೆ ?
ಗೆರೆ ಬಿಚ್ಚಿ ಶಶಿಯ ಬೆಳದಿಂಗಳನೆ ಅಪ್ಪಿ
ಪ್ರೀತಿಸುವ ಪರಿ.
ಸಫಲವೋ , ವಿಫಲವೋ
ಪರಿಸ್ಥಿತಿಯ ಅರಿತು ಒಡಂಬಡಿಸುವುದು ಅತಿ ಒಳಿತು..

ಹರಡಿ ನಿಂತ ಹೆಮ್ಮರದ
ಸಕಲ ಭಾರವನು ಹೊತ್ತ ಮುದಿ ಬೇರು,
ಉದುರಿದ ಒಣ ಎಲೆಗೆ ಸಾಂತ್ವನಿಸುವುದಿಲ್ಲವೇ ?
ಎಲ್ಲವನು ಮರೆತು
ಯೋಚಿಸದೇ, ಹಸಿರಾಗಿದ್ದಾಗ ಮಾಡಿದ ಎಲೆಯ ಗೇಲಿಯನು ಕುರಿತು.
ಸೌಖ್ಯವೋ , ದುಗುಡವೋ
ಸೋತ ಸಂಗಾತಿಗೆ ಸಾಂತ್ವನಿಸುವುದು ಅತಿ ಒಳಿತು..

1 comment:

Unknown said...

Hey this is really superb... do u publish these poetries in any of the magazines???