Sunday 14 September 2008

ಓ ,ಪ್ರಿಯೇ
ಮರೆಯಲಾರದೇ ನಿನ್ನ
ನೊಂದ ಆ ನಿರ್ಜೀವ ಕ್ಷಣಗಳ ಬಡಿತ,
ಮನದಾಳದಿ ಮಿಂದ
ಆ ಬಲಿತ ಭಾವನೆಗಳ ಮಿಡಿತ,
ತಾಳಲಾರೇನು ನಾನುನನ್ನಾವರಿಸಿದ
ಈ ನಿನ್ನೊಲವಿನ ತುಡಿತ .


ಕಣ್ಣೋಟ
ಹುಡುಕುತಿಹುದುನಿನ್ನ ಇರುವಿಕೆಯನು,
ಮನದಾಸೆ ಕಾಯುತಿಹುದು
ನಿನ್ನ ಮರೆಯಾದ ಮಂದಹಾಸವನು,
ಈ ಮೌನ ಆರೆಸುತಿಹುದು
ನಿನ್ನ ಮಧುರ ಮಾತನು.


ಓ ಪ್ರಿಯೇ,
ಸಾಕುಮಾಡು ನಿನ್ನ ಈ ಕಣ್ಣಾಮುಚ್ಚಾಲೆ !!!
ಹಟದ ಅಶ್ವವವೇರಿ
ಗೆದ್ದವರು ಯಾರೇ ?
ವಿರಹ ಕಿಚ್ಚನು ಅಪ್ಪಿ
ಉಳಿದವರು ಯಾರೇ ?

ಮಿಡಿಯುವುದು ಅರುಣರಾಗ
ನಿನ್ನ ಮೌನ ಮುರಿದರೆ,
ಮೂಡುವುದು ಅನುರಾಗ
ಮನಸ್ವಿ ನೀನನ್ನ ಅರಿತರೆ.

No comments: