Sunday 14 September 2008

ಉಪನದಿ - ಬೆರೆತರೆ ಬೆಳೆದಾವು , ಒಡೆದರೆ ಮಡಿದಾವು
ಉಗಮವಾದವು ಎಲ್ಲೋ ದೂರದ ಗಿರಿ- ಕಂದರಗಳಲಿ,
ಬೆರೆತವು ,ಬೆಳೆದವು ಒಡನಾಡಿ,
ಹರಿದವು; ಬಳುಕುತ್ತ ಬಾಯಾರಿದ ಭೂಮಿಯಲಿ,
ದಿಕ್ಕು ಬದಲಿಸದೆ ,ಹಿಂಜರಿಯದೆ.
ಚಲಿಸಿದವು ಕಲ್ಲು-ಮುಳ್ಳಿನ ಹಾದಿಯಲಿ ,ಕಾಡು-ಮೇಡಿನ ಮಧ್ಯದಲಿ
ಹಸಿರನ್ನು ಹರಡುತ್ತ, ಚೈತನ್ಯವ ಚೆಲ್ಲುತ್ತ,
ಅಪ್ಪಿದವು ಸಾಗರವ ಸಾಧನೆಯಗೈಯುತ್ತ,
ಸಾರ್ಥಕತೆಯ ಪಡೆಯುತ್ತ....

No comments: