Sunday 14 September 2008

ಬಯಕೆ
ಎನ್ನ ಮನದ ಮಂಟಪದಲಿ
ಸಿಂಗರೀಸಿದೆ ಸಹಸ್ರ ಸವಿ ಕನಸುಗಳು,
ನಿನ್ನ ಕಂಡಾಕ್ಷಣ ಉದ್ಭವಿಸಿದ ಭಾವಗಳು,
ನನ್ನನಪ್ಪಿ ಅವರಿಸಿದೆ ಬೃಹದಾಗಿ ಬೆಳೆದು...
ಧನಸ್ಸಿನಿಂದ ಚಿಮ್ಮಿದ ಅಮ್ಬುವಿಗೆ
ನಿನ್ನ ಅನುಪಸ್ಥಿತಿಯಲ್ಲಿ ಗುರಿಯೂ ಮರೆತು ಹೋದಂತೆ ,
ಮನಸ್ಸಿಗೆ ತಮಸ್ಸು ಒರಗಿ
ಖುಷಿಯೂ ಮಡಿದಂತೆ , ನಲಿವು ಮರೆತು ಹೋದಂತೆ...
ಕ್ರಿಷ್ಣಪಥದಲಿ ಕಳೆದು ಹೋಗಿಹುದು ಬದುಕು,
ಕಣ್ಣರೆಪ್ಪೆಗಳಲೇ ನೀ ಆಡುವ ಮಾತುಗಳಿಗೆ
ಬಯಕೆಯ ಹೊಸ್ತಿಲಲೆ ಆಲಿಸುತಿದೆ ಸೋತ ಮನವು

ಮೌನವನವರಿಸಿದ ಮನಸ್ವಿಯೇ ,
ಮನಸಿಗೇಕೆ ಈ ಮೋಸದ ಮುಖವಾಡ ?
ಮಧುರ ಮಾತುಗಳನಾಡಿ ,
ಮೇಘವರ್ಷವ ತಾರೆ ಎನ್ನ ಮಾನಸ ಸರೋವರಕೆ..
ತುಂಟ ನಗೆಯನು ಬೀರಿ,
ಚೈತನ್ಯವ ತಾರೆ ಎನ್ನ ಹಿತ ಚಿತ್ತಕೆ..
ಇದೇ ಎನ್ನ ಮನದಾಳದ ಬಯಕೆ !!!

No comments: